Sunday, November 8, 2009

ಜನರೇ ಕಾರಣ -ರಾಜಕಾರಣಿಗಳ ಮೇಲೊಂದು ಅನುಕಂಪದ ನೋಟ

ನಾರಾಯಣ ನಾರಾಯಣ!
ಹಲವು ದಿನಗಳಿಂದ ನೋಡ್ತಾ ಇದ್ದೇನೆ. ಮುಖ ನೋಡಲ್ಲ ಅಂತಾರೆ, ಮತ್ತೆ ಅಣ್ಣ ತಮ್ಮ ಅಂತಾರೆ, ಎಲ್ಲದ್ರ ಜೊತೆ ರಾಜ್ಯದ ಹಿತಕ್ಕಾಗಿ ಅಂತಾನೇ ಇರ್ತಾರೆ. ನಿಮಗೆಲ್ಲಾ ಗೊತ್ತಿರೋ ರೀತಿ ಅವರೇ ನಿಮ್ಮ ರಾಜಕಾರಣಿಗಳು.

ಮನೆ ಕಟ್ಟಿಸುತ್ತೆ, ಪರಿಹಾರ ಕೊಡುತ್ತೆ ಅಂತ ಕಾಯ್ತಿರೋ ಉತ್ತರ ಕರ್ನಾಟಕದ ಸಂತ್ರಸ್ತ ಜನ ಕೂಡಾ ಸರಕಾರದ ಮೇಲೆ ಭರವಸೆಯಿಂದ ಕಾಯ್ತಾ ಇದಾರೆ. ಎಲ್ಲಾ ಜನ ರಾಜಕಾರಣಿಗಳನ್ನ ಬೈತ್ತಾ ಇದಾರೆ. ನಾರಾಯಣ ನಾರಾಯಣ!

ಪ್ರೀತಿಯ ಜನರೇ,
ನಿಮ್ಮ ಪರಿಸ್ಥಿತಿ, ಅಸಹಾಯಕತೆ ನಂಗೆ ಅರ್ಥ ಆಗುತ್ತೆ. ಆದ್ರೆ ನಿಮ್ಮದೇನೂ ತಪ್ಪಿಲ್ಲ, ರಾಜಕಾರಣಿಗಳೇ ದುಷ್ಟರು ಅಂತ ನಿಮ್ಮ ಪರ ನಿಲ್ಲೋ ಸ್ಥಿತಿಯಲ್ಲಿ ನಾನಿಲ್ಲ. ಯಾಕಂದ್ರೆ ನಿಮಗಿಂತ ಜಾಸ್ತಿ ಅನುಕಂಪ ನಂಗೆ ನಾಯಕರ ಮೇಲಿದೆ. ಅವರನ್ನ ಬೈಯೋದು ನಿಮ್ಮ ಮನಸ್ಸಿನ ಭಾರ ಕ್ಡಿಮೆಯಾಗಿಸಬಹುದು, ಮಾಧ್ಯಮಗಳಿಗೆ ಅದು ಉದ್ಯೋಗವಾಗಿರಬಹುದು. ಆದ್ರೆ ಬರೀ ಸುತ್ತಾಡ್ತಿರೋ ನನ್ನಂತೋರಿಗೆ ಮಾತ್ರ ಅವರನ್ನ ನೋಡಿದ್ರೆ ಮರುಕ ಬರುತ್ತೆ.
ಅಂಥವರಿಗೆ ಯಾಕೆ ಓಟು ಹಾಕಿದ್ರಿ ಅಂತ ನಾನು ಕೇಳ್ತೀನೆ ಅಂತ ನಿಮಗೂ ಗೊತ್ತು. ಬರೀ ರೌಡಿಗಳೇ ಓಟಿಗೆ ನಿಂತ್ರೆ ಇನ್ನೇನ್ ಮಾಡ್ಲಿ ಅಂತ ತಾನೇ ನಿಮ್ಮ ಉತ್ತರ? ತಡೀರಿ. ಇದೇ ಬಳ್ಳಾರಿ ಹೇಗಿತ್ತು ನೆನಪು ಮಾಡ್ಕೊಳ್ಳಿ. ಆಗ ಬಿಜೆಪಿ ನಿಜವಾಗಿಯೂ ಹಣದ ಹಿಂದೆ ಬಿದ್ದಿರ್ಲಿಲ್ಲ. ಆದ್ರೆ ಬಳ್ಳಾರಿಯಲ್ಲಿ ಅಷ್ಟಿಟ್ಟು ಹಣ ಹಂಚಿ, ಬಡವರನ್ನ ಓಲೈಸಿ ಗೆಲ್ಲೋ ಕಾಂಗ್ರೆಸ್ ಮೆರಿತಾ ಇತ್ತು. ಆವತ್ತು ಬಿಜೆಪಿಗೆ ಓಟು ಹಾಕೋಣ ಅಂತ ನಿಮಗೇನಾದ್ರೂ ಅನ್ನಿಸ್ತಿತ್ತಾ? ಆವಾಗ ಬಿಜೆಪಿಯನ್ನು ಗೆಲ್ಲಿಸದ ನೀವು ಈಗೇಕೆ ಬಿಜೆಪಿಗೆ ಮುಗಿಬಿದ್ದು ಓಟು ಹಾಕ್ತೀರ? ಸುಷ್ಮಾರನ್ನು ಗೆಲ್ಲಿಸೊದಿಕ್ಕಾಗಿ ರಾಜಕೀಯ ಕಲಿತ ಜನ ಬಳ್ಳಾರಿ ರಾಜಕಾರಣವನ್ನು ಹೇಗೆ ತಿರುಗಿಸಿದ್ರು ನಿಮಗೆ ಗೊತ್ತು ತಾನೆ?
ಹಣ, ಅವ್ಯವಹಾರ, ಹೊಲಸು ರಾಜಕೀಯ, ಭ್ರಷ್ಟಾಚಾರ, ನಾಟಕ ಅಂತೆಲ್ಲ ನೀವೇನನ್ನ ಕರೀತೀರೋ, ಎಲ್ಲಾ ಬಿಡೋಕೆ ರೆಡ್ಡಿಗಳು ಸಿದ್ಧರಿದಾರೆ. ಅವರನ್ನ ಗೆಲ್ಲಿಸೋಕೆ ನೀವು ರೆಡೀನಾ? ಹೌದು ಅಂತೀರ, ಆದ್ರೆ ನೀವು ಹಾಗೆ ಮಾಡಲ್ಲ ಅಂತ ನಂಗೊತ್ತು. ಅಲ್ಲಿಂದ್ಲೇ ಶುರು.
ಇದೇ ಯಡಿಯೂರಪ್ಪ, ಅನಂತು ಎಲ್ಲ ಸೇರಿ ಹಣ ಇಲ್ಲ, ಜನ ಬೆಂಬಲ ಇಲ್ಲ ಅಂತಿರೋ ಕಾಲದಲ್ಲಿ ಎಷ್ಟು ಕಷ್ಟ ಪಟ್ಟಿದ್ರು ಅಂತ ಗೊತ್ತಾ? ತಮ್ಮ ಉದ್ಯೋಗ, ವೈಯಕ್ತಿಕ ಜೀವನ, ನೆಮ್ಮದಿ ಎಲ್ಲಾ ಬಿಟ್ಟು ಬಂದವರು ಅಧಿಕಾರ ಬಂದ ಕಾರಣಕ್ಕಷ್ಟೇ ಬದಲಾದ್ರು ಅಂತೀರ? ಆ ಕಾಲದಲ್ಲಿ ಹಣ ಮಾಡ್ಬೇಕು ಅನ್ನೋದೇ ಉದ್ದೇಶ ಅಂತಿದ್ರೆ ಅಷ್ಟೆಲ್ಲಾ ಕಷ್ಟ ಬರ್ತಿದ್ರಾ?

No comments: