Monday, April 5, 2010

ಬಿಬಿಎಂಪಿ ಫಲಿತಾಂಶ -ಕುಮಾರಣ್ಣ ಫುಲ್ ಖುಷ್

ಬಿಬಿಎಂಪಿ ಚನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಪತ್ರಿಕೆಗಳೆಲ್ಲ ಬಿಜೆಪಿ ಹಿಂದೆ ಬಿದ್ದಿದ್ರೆ ನಾನು ಮಾತ್ರ ವಿರೋಧ ಪಕ್ಷಗಳ ಹಿಂದೆ ಸುತ್ತಾಡಿ ಬಂದೆ.
ಕುಮಾರಣ್ಣ ಹೇಳಿದ್ದಿಷ್ಟು:
"ಈ ಬಿಬಿಎಂಪಿ ಚುನಾವಣೆ ಏನು ನಡೀತು... ಅದರ ಒಂದು ಫಲಿತಾಂಶ ಏನು ಬಂದಿದೆ..., ಅದರ ಬಗ್ಗೆ ನಂಗೆ ಏನು ಅನ್ನಿಸ್ತಾ ಇದೆ ಅಂದ್ರೆ, ಫಲಿತಾಂಶವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಜನತೆ ಜೆಡಿಎಸ್ ಪರವಾಗಿ ತೀರ್ಪು ನೀಡಿರುವುದು ಸ್ಪಷ್ಟವಾಗಿ ಕಂಡುಬರ್ತಾ ಇದೆ ಅನ್ನೋದನ್ನ ನಾನು ಹೇಳೋದಕ್ಕೆ ಇಚ್ಛೆ ಪಡ್ತೇನೆ. ಅದು ಹೇಗೆ ಅಂತಂದ್ರೆ, ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸುತ್ತೇ ಅನ್ನತಕ್ಕಂತಹ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬಹುಮತಕ್ಕೆ ಸ್ವಲ್ಪ ಕಡಿಮೆ ಸೀಟುಗಳನ್ನೇನಾದ್ರೂ ಪಡೆದು ಮತ್ತೆ ಈ ಆಪರೇಶನ್ ಕಮಲ ಅಂತ ಏನು ಕರೀತಾರೆ, ಅದ್ರ ಮೂಲಕ ನಮ್ಮ ಪಕ್ಷದ ವಿಜೇತರನ್ನು ಪಕ್ಷಾಂತರ ಮಾಡುವಂತಹ ನೀಚ ಕೆಲಸಕ್ಕೇನಾದ್ರು ಕೈ ಹಾಕ್ತಾರೋ ಅನ್ನೋ ಭಯ ನಮ್ಮೆಲ್ಲರನ್ನ ಕಾಡಿತ್ತು. ಆದ್ರೆ ಬೆಂಗಳೂರಿನ ಪ್ರಜ್ಞಾವಂತ ಮತದಾರರು ಯಾರಿದಾರೆ, ಅವರು ಬಿಜೆಪಿಗೆ ಬಹುಮತ ನೀಡಿಈ ಆಪರೇಶನ್ ಕಮಲವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಅಂತ ನಾನು ಹೇಳೋಕೆ ಇಚ್ಛೆ ಪಡ್ತೇನೆ. ಆಪರೇಶನ್ ಕಮಲದ ಅತ್ಯ ಬಿಜೆಪಿಗೆ ಬೀಳದೇ ಇರೋದಕ್ಕೆ ನಂಗೆ ತುಂಬಾ ಸಂತೋಷ ಆಗ್ತಾ ಇದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬೆಂಗಳೂರಿನ ಅಭಿವೃದ್ಧಿಗೆ ಏನು ಶ್ರಮ ಪಟ್ಟಿದ್ದಾರೆ, ಅದರ ಪರಿಣಾಮ ಇಲ್ಲಿ ಸ್ಪಷ್ಟವಾಗಿ ಕಂಡುಬರ್ತದೆ.

ಇನ್ನು ದೇಶಪಾಂಡೆ ಅವರು ಏನಂತಾರೆ ಓದಿ:
ಬಿಜೆಪಿ ಸರಕಾರ ಅಭಿವೃದ್ಧಿ ವಿರೋಧಿ. ನಮ್ಮ ಪಕ್ಷ ಈ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಯಾಕೆ ಸೋತಿದೆ ಎಂಬ ಆತ್ಮ ವಿಮರ್ಶೆಯನ್ನು ಮಾಡ್ತಾ ಇದ್ದೇವೆ. ಅದಾದ ನಂತ್ರ ಬಿಬಿಎಂಪಿ ಚುನಾವಣೆಯ ಸೋಲಿನ ಬಗ್ಗೆಯೂ ವಿಮರ್ಶೆ ಮಾಡ್ತೇವೆ.  ಈಗ್ಲೇ ಏನೂ ಹೇಳಕ್ಕಾಗಲ್ಲ.