ಕಮ್ಯುನಿಷ್ಟರು ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ನಡೆಸಿದ ದೌರ್ಜನ್ಯ, ದೇಶದಲ್ಲೆಲ್ಲ ಅದರ ವಿರುದ್ಧ ಅನೇಕರ ಹೇಳಿಕೆ, ಪ್ರತಿಭಟನೆಗಳು ನಿಮಗೆ ತಿಳಿದೇ ಇವೆ. ಇವೆಲ್ಲದರ ಮಧ್ಯೆ ಬೆಂಗಳೂರಿನ ‘ಮಂಥನ’ ವೇದಿಕೆಯು, ನಂದಿಗ್ರಾಮದಲ್ಲಿ ಫ್ಯಾಸಿಸ್ಟ್ ಅವತಾರಿ ಕಮ್ಯುನಿಷ್ಟರ ದೌರ್ಜನ್ಯವನ್ನು ಸ್ವಾಗತಿಸಿದ್ದು ವಿಶೇಷವಾಗಿದೆ.
ನಂದಿಗ್ರಾಮದ ದೌರ್ಜನ್ಯದ ಬಗ್ಗೆ ಮಂಥನ ಏರ್ಪಡಿಸಿರುವ ವಿಚಾರಗೋಷ್ಠಿಯ ಆಹ್ವಾನಪತ್ರಿಕೆಯ ತುಣುಕೊಂದರಲ್ಲಿ "ಮಂಥನ ಸ್ವಾಗತಿಸುತ್ತಿದೆ" ಎಂದು ಬರೆದಿರುವುದನ್ನು ನೀವು ಇಲ್ಲಿ ನೋಡಬಹುದು:
Sunday, December 2, 2007
ತಣ್ಣಗಾದ ವಿಜಯ ಕರ್ನಾಟಕ
ಎಸ್ ವಿ ಪದ್ಮನಾಭ್ ಅವರ ವ್ಯಂಗಚಿತ್ರಗಳಿಂದ ’ಗರಮಾಗರಂ’ ಆಗಿರುತ್ತಿದ್ದ ವಿಜಯ ಕರ್ನಾಟಕ ಈಗ ತಣ್ಣಗಾಗಿರುವುದನ್ನು ನೀವು ಗಮನಿಸಿರಬಹುದು. ವಿಜಯಕರ್ನಾಟಕ ಈಗ ತನ್ನ ಹೊಸ ಬತ್ತಳಿಕೆಯಿಂದ ಬಾಣಗಳನ್ನು ಬಿಡ್ತಾ ಇದೆ. ಪದ್ಮನಾಭರು ಕನ್ನಡ ಪ್ರಭ ವನ್ನು ಬಿಸಿಯಾಗಿಸಲು ಹೊರಟಿದ್ದಾರೆ. ನಂಬರ್ ಒನ್ ಪತ್ರಿಕೆ ಯಾಕೆ ಬಿಟ್ಬಿಟ್ರು ಅನ್ನೋದು ಸುದ್ದಿಮನೆಯ ಗುಸುಗುಸು. ವಿಜಯ ಕರ್ನಾಟಕ ಟೈಂಸ್ ವಶವಾದನಂತರ ಒಳಗೆ ಹಲವು ಚಟುವಟಿಕೆಗಳು ನಡೆಯುತ್ತಿತ್ತು, ಇದೀಗ ಪದ್ಮನಾಭರು ಹೊರಗೆ ಬಂದಿದ್ದಾರೆ. ಇನ್ನೇನೇನು ಆಗುತ್ತೋ ನೋಡ್ಬೇಕು.
Subscribe to:
Posts (Atom)