Sunday, December 13, 2009

ಸಿನೆಮಾ ಮಂದಿರಗಳ ಹೊರಗೊಂದು ರೌಂಡ್ ಅಪ್

ನಾರಾಯಣ ನಾರಾಯಣ!
ಅದೊಂದು ಸಿನೆಮಾ!
ಒಂದಷ್ಟು ಮಳೆ, ಮಳೆಯಲ್ಲಿ ಒಂದಷ್ಟು ಭಾವಾವೇಶದ ಮಾತುಗಳು, ಕೊಡಗಿಗೆ ಪ್ರಯಾಣ ನಡೆಸಿ ಅಲ್ಲೊಂದಿಷ್ಟು ಲವ್ ಸ್ಟೋರಿ, ಒಂದು ಮದುವೆ ಮನೆ, ಮಾತಿನ ಮಲ್ಲ ನಾಯಕ(ಗಣೇಶ್), ಒಬ್ಬರು ಮಿಲಿಟ್ರಿ ಅಂಕಲ್, ಇವೆಲ್ಲಾ ಇರೋ ಸಿನೆಮಾ ಉಲ್ಲಾಸದಿಂದಲೇ ಆರಂಭವಾಗುತ್ತದೆ. ಸ್ವಲ್ಪ ಹಾಸ್ಯ ಕೂಡಾ, ಆದರೆ ಸಮಯ ಕಳೆದಂತೆ ಕಥೆ ಗಂಭೀರವಾಗುತ್ತಾ ಸಾಗುತ್ತದೆ. ಕೊನೆಗೆ ಕೈ ತುಂಬ ಹೂ ಹಿಡಿದುಕೊಂಡ ನಾಯಕನನ್ನು ನೋಡಿ ಎಲ್ಲ ಪ್ರೇಕ್ಷಕರೂ ಕಣ್ಣೀರು ಕಾಕುತ್ತಾರೆ.
ಅಲ್ಲ. ಇದು ಮುಂಗಾರು ಮಳೆಯ ಕಥೆಯಲ್ಲ. ಮಳೆಯಲಿ ಜೊತೆಯಲಿ ಸಿನೆಮಾದ ಬಗ್ಗೆ ನಾನು ಹೇಳ್ತಾ ಇರೋದು. ಇದೆಲ್ಲಾ ದೃಷ್ಯ ಮುಂಗಾರುವಿನಲ್ಲೂ ನೋಡಿದೀನಲ್ಲಾ ಅಂತ ತಲೆ ಚಚ್ಚೋ ಅಗತ್ಯವಿಲ್ಲ. ಅದೇ ಪ್ರೀತಂ ಬರೆದ ಇನ್ನೊಂದು ಕಥೆಯಂತೆ ಇದು. ಮುಂಗಾರು ಮಳೆ ಯಾಕೆ ಗೆಲ್ತು ಅನ್ನೋದನ್ನ ಅಧ್ಯಯನ ಮಾಡಿ ಆ ಎಲ್ಲಾ ಅಂಶಗಳನ್ನು ಸೇರಿಸಿ ಇನ್ನೊಂದು ಸಿನೆಮಾ ಮಾಡಿದಾರಂತೆ!
ಅಂದ ಹಾಗೆ, ನಾನಂತೂ ಮಳೆಯಲಿ.. ಸಿನೆಮಾ ನೋಡಿಲ್ಲ. ಮತ್ತೆ ಹೇಗೊತ್ತು ಇಷ್ಟೆಲ್ಲ ಅಂತಾನ?

ನಾರಾಯಣ ನಾರಾಯಣ!
ನಾಲ್ಕು ಪೇಪರಿನಲ್ಲಿ ಬಂದ ವಿಮರ್ಶೆ ಓದಿದ್ರೆ ಇದೆಲ್ಲಾ ಗೊತ್ತಾಗುತ್ತಲ್ವ? ಹಾಗೇ, ಊರು ಸುತ್ತೋ ನಾನು ನಾಲ್ಕು ಜನರ ಹತ್ರ ಮಾತಾಡಿದ್ರೆ ಇದೆಲ್ಲಾ ಹೇಳ್ತಾರೆ.
ನೀವೇನಾದ್ರೂ ವಿಕ ಓದಿದ್ರಾ? ಅದರಲ್ಲಿ ಹೀಗೇನೂ ಇರಲಿಲ್ಲ ಯಾಕೆ ಅಂತ್ಲಾ? (ವಿಕ ಓದದಿದ್ರೆ ಕೇಳಿ, ಮಳೆಯಲಿ... ಓಡ್ತಾ ಇರೋ ಎಲ್ಲಾ ೪೦ ಚಿತ್ರಮಂದಿರಗಳ ಮಾಲಿಕರೂ, ಧೂಳು ಹಿಡಿದಿದ್ದ "House Full" ಫಲಕಗಳನ್ನು ಒರೆಸಿ ತೆಗೆದಿದ್ದಾರೆ ಅಥವಾ ಹೊಸದಾಗಿ ಮಾಡಿಸಿದ್ದಾರಂತೆ.)
ಗುಟ್ಟು: ವಿಕದಲ್ಲಿ ವಿಮರ್ಶೆ ಬರೀತಿದ್ದಾ ದೇವಶೆಟ್ಟಿ ಮಹೇಶ್ ಈ ಸಿನೆಮಾಗೆ ಸಂಭಾಷಣೆ ಬರೆದಿದ್ದಾರೆ.
ಸಿನೆಮಾ ಹಿಟ್ ಆಗ್ಬೇಕಾ? ಮಳೆ, ಮಾತು, ಗನ್ ಮ್ಯಾನ್, ಮೊಲ ಏನೂ ಬೇಕೇ ಅಂತೇನಿಲ್ಲ, ದಿನ ಪತ್ರಿಕೆಗಳಲ್ಲಿ ವಿಮರ್ಶೆ ಬರೊಯೋರ ಹತ್ರ ಸಂಭಾಷಣೆ ಬರೆಸಿ!

1 comment:

Unknown said...

ನಮಸ್ಕಾರ,
ನಡುಬೀದಿ ನಾರದರಿಗೆ....
ನೀವು ಹೇಳಿದ ವಿಷಯ ಹೌದು, ನಾನೂ ಸಿನಿಮಾ ಮಾಡುವ ಹುನ್ನಾರದಲ್ಲಿದ್ದೇನೆ. ಸಂಭಾಷಣೆ ಮಹೇಶ್ ದೇವಶೆಟ್ಟಿ, ಹಾಡುಗಳು- ಕನ್ನಡದ ಎಲ್ಲಾ ಪತ್ರಿಕೆಗಳ ಸಂಪಾದಕರಿಂದ..
whatt an idea sirji...!!??