Friday, November 30, 2007

ಮಲೇಷ್ಯಾ ವಿವಾದ: ಬೀಜೇಪಿಗೂ ಡೀಯಂಕೆಗೂ ಬಿಸಿ

ರಾಮಸೇತು ವಿವಾದದಲ್ಲಿ ಬಡಿದಾಡಿಕೊಳ್ತಾ ಇರೋ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳು ಈಗ ಮಲೇಷ್ಯಾ ವಿವಾದದಲ್ಲಿ ಒಂದಾಗಿ ಯುಪಿಎ ಮೌನದ ವಿರುದ್ಧ ಹೋರಾಡ್ತಾ ಇದಾರೆ. ಅಲ್ಲೇನಾಗಿದೆ ಎಂದು ನೋಡಲು ನೇರ ಮಲೇಷ್ಯಾಗೆ ಹೋದೆ. ಅಲ್ಲಿ ಹೋಗಿದ್ದೇ ನನ್ನನ್ನ ಕೊಲ್ಲೋ ಥರಾ ನೋಡೋಕೆ ಶುರು ಮಾಡಿದ್ರು. ನಾರಾಯಣ ನಾರಾಯಣ! ಜೀವ ಉಳಿದ್ರೆ ಸಾಕು ಅಂತ ಅಲ್ಲಿಂದ ಮಾಯವಾದವ ನೇರ ಭಾರತಕ್ಕೆ ಹೋಗಿ ಅಲ್ಲಿನ ಪೇಪರ್ ನೋಡಿದ್ರೆ...

ಮಲೇಷ್ಯಾದಲ್ಲಿ ಹಿಂದುಗಳಿಗೆ ಅನ್ಯಾಯ ಆಗ್ತಿದೆ, ಹಿಂದುಗಳ ಹಕ್ಕುಗಳಿಗೆ ಧಕ್ಕೆಯಾಗಿದೆ, ದೇಗುಲಗಳು ನಾಶವಾಗ್ತಿದೆ, ಹಿಂದುಗಳನ್ನು ಅಮಾನೀಯವಾಗಿ ನೋಡ್ತಿದ್ದಾರೆ, ಬದುಕೋಕೆ ಬಿಡ್ತಿಲ್ಲಾ.. ಅಂತೆಲ್ಲಾ ಆರೋಪಿಸ್ತಿರೋ ಬೀಜೇಪಿ, ಭಾರತ ಸರಕಾರ ಮಧ್ಯ ಪ್ರವೇಶಿಸಬೇಕು ಅಂತಾ ಇದೆ.
ಅಲ್ಲಿ ತಮಿಳರ ವಿರುದ್ಧ ದೌರ್ಜನ್ಯ ನಡೀತಿದೆ, ತಮಿಳರ ಸ್ಥಿತಿ ಹೀನಾಯವಾಗಿದೆ, ತಮಿಳರಿಗೆ ಸ್ವಾತಂತ್ರ್ಯವಿಲ್ಲ.. ಅಂತೆಲ್ಲ ಡೀಎಂಕೆ ಹೇಳ್ತಾ ಇದೆ.

ಇದು ನಂ ದೇಶದ ವಿಚಾರ, ನೀವು ತಲೆ ಹಾಕ್ಬೇಡಿ ಅಂತ ಮಲೇಷ್ಯಾ ಪ್ರಧಾನಿ...

ಏನೇ ಆಗ್ಲಿ, ಹಿಂದುಗಳು ಅಂದ್ರೂ ತಮಿಳರು ಅಂದ್ರು ಒಂದೇ ಅಂತ ಜನರಿಗಾದ್ರು ಅರ್ಥವಾಗ್ಲಿ ಅಷ್ಟು ಸಾಕು.