Thursday, February 5, 2009

ಅಲ್ಲಿ ಪಬ್ ಇರಲೇ ಇಲ್ಲ -ಸಾಕ್ಷ್ಮ್ಯ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ’ಪಬ್ ಮೇಲಿನ ದಾಳಿ’ ಎಂದೇ ಪ್ರಖ್ಯಾತವಾದ ಪ್ರಕರಣ ದಾರಿ ತಪ್ಪಿಸುವ ಯತ್ನವಾಗಿದ್ದು ಅಲ್ಲಿ ಪಬ್ ಇರಲೇ ಇಲ್ಲ ಎಂದು ತಿಳಿದು ಬಂದಿದೆ.
ಯಾವುದೇ ಟಿವಿ ಚಾನೆಲ್ ಗಳಲ್ಲಿ ಯುವತಿಯರ ಮೇಲಿನ ಆಕ್ರಮಣವನ್ನೇ ಪದೇ ಪದೇ ನೇರ ಪ್ರಸಾರ ಮಾಡಿದ್ದಲ್ಲದೆ ಎಲ್ಲೂ ಪಬ್ ದೃಶ್ಯಗಳನ್ನು ಪ್ರಸಾರ ಮಾಡಿಲ್ಲ.
ಅಂಥಹ ಯಾವುದೇ ಪಬ್ ಇದ್ದ ಬಗ್ಗೆ ಸರಕಾರದ ಬಳಿ ದಾಖಲೆ ಇಲ್ಲ.
ತಾವು ಪಬ್ಬಿಗೆ ಹೋಗಿರುವುದನ್ನು/ ಪಬ್ಬಿನಲ್ಲಿರುವಾಗ ಆಕ್ರಮಣವಾಗಿರುವುದನ್ನು ಯಾವುದೇ ಯುವತಿಯರೂ ದೂರು ನೀಡಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ದಾಳಿಯ ಉದ್ದೇಶ ಏನಿರಬಹುದು ಎಂದು ತಿಳಿಯುವುದಕ್ಕೋಸ್ಕರ ನಗರ ಸಂಚರಿಸಿದಾಗ, ಕೆಲವು ಅಭಿಪ್ರಾಯಗಳು ವ್ಯಕ್ತವಾದವು. ಓದಿ:

-ದೇಶದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಮುಂತಾದ ಕ್ಷುಲ್ಲಕ ಪ್ರಕರಣಗಳು ಎಷ್ಟೇ ನಡೆದರೂ, ಈ ಥರ ಥಳಿತ, ನೆಲದ ಮೇಲೆ ಬೀಳಿಸುವುದು ಹೆಚ್ಚು ನಡೆಯುತ್ತಿರಲಿಲ್ಲ. ಘಟನೆಯನ್ನು ನೂರಾರು ಬಾರಿ ಪ್ರಸಾರ ಮಾಡಿದ ಚಾನೆಲ್ ಗಳಿಗೆ ’ನಾರದ’ ಪ್ರಶಸ್ತಿ ನೀಡಿ ಗೌರವಿಸಬೇಕು.
-ಪೋಲಿಸರಿಗೆ ಘಟನೆಯ ಮಾಹಿತಿ ನೀಡಿ ಅದನ್ನು ತಡೆದಿದ್ದಲ್ಲಿ ಈ ಮಟ್ಟಿನ ಜಾಗೃತಿ ಉಂಟಾಗುತ್ತಿರಲಿಲ್ಲ. ಅಲ್ಲಿ ಪಬ್ ಇರಲಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಿದ ಮಾಧ್ಯಮಗಳಿಗೆ ಧನ್ಯವಾದಗಳು.
- ಇದು ಅಪ್ಪಟ ಕೋಮುವಾದ. ದೇಶದಲ್ಲಿ ಪಬ್ಬುಗಳಂತಹ ಜಾತ್ಯತೀತ ಶಕ್ತಿಗಳನ್ನು ಅಡಗಿಸಿದ ರಾಮ ಸೇನೆಯನ್ನು ನಿಷೇದಿಸಬೇಕು. ಧಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆಗೆಳಲ್ಲಿ ’ಕೋಮುವಾದ ಅಳಿಸಿ, ಜಾತ್ಯತೀತತೆ ಉಳಿಸಿ’ ಎಂಬ ಫಲಕಗಳೇ ಇದಕ್ಕೆ ಸಾಕ್ಷಿ.

ನರಾಯಣ ನಾರಾಯಣ!

ನೀರು ಸರಬರಾಜಿಗೆ ವಿದಾಯ!


ನೀರು ಸರಬರಾಜು, ತ್ಯಾಜ್ಯ ನೀರು ಕೊಳವೆಗಳ ಬದಲಾವಣೆ ಇತ್ಯಾದಿಗಳಿಗೆ ವಿದಾಯ ಹೇಳಲು ಸರಕಾರ ನಿರ್ಧರಿಸಿದ್ದನ್ನು ಸರಕಾರದ ಜಾಹೀರಾತಲ್ಲೇ ಓದಿ. ನಾರಾಯಣ ನಾರಾಯಣ!