Sunday, December 2, 2007

ತಣ್ಣಗಾದ ವಿಜಯ ಕರ್ನಾಟಕ




ಎಸ್ ವಿ ಪದ್ಮನಾಭ್ ಅವರ ವ್ಯಂಗಚಿತ್ರಗಳಿಂದ ’ಗರಮಾಗರಂ’ ಆಗಿರುತ್ತಿದ್ದ ವಿಜಯ ಕರ್ನಾಟಕ ಈಗ ತಣ್ಣಗಾಗಿರುವುದನ್ನು ನೀವು ಗಮನಿಸಿರಬಹುದು. ವಿಜಯಕರ್ನಾಟಕ ಈಗ ತನ್ನ ಹೊಸ ಬತ್ತಳಿಕೆಯಿಂದ ಬಾಣಗಳನ್ನು ಬಿಡ್ತಾ ಇದೆ. ಪದ್ಮನಾಭರು ಕನ್ನಡ ಪ್ರಭ ವನ್ನು ಬಿಸಿಯಾಗಿಸಲು ಹೊರಟಿದ್ದಾರೆ. ನಂಬರ್ ಒನ್ ಪತ್ರಿಕೆ ಯಾಕೆ ಬಿಟ್ಬಿಟ್ರು ಅನ್ನೋದು ಸುದ್ದಿಮನೆಯ ಗುಸುಗುಸು. ವಿಜಯ ಕರ್ನಾಟಕ ಟೈಂಸ್ ವಶವಾದನಂತರ ಒಳಗೆ ಹಲವು ಚಟುವಟಿಕೆಗಳು ನಡೆಯುತ್ತಿತ್ತು, ಇದೀಗ ಪದ್ಮನಾಭರು ಹೊರಗೆ ಬಂದಿದ್ದಾರೆ. ಇನ್ನೇನೇನು ಆಗುತ್ತೋ ನೋಡ್ಬೇಕು.

No comments: